ವಕ್ರವೃಕ್ಷ

ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?

Showing posts with label ತನ್ನಿಮಿತ್ತ. Show all posts
Showing posts with label ತನ್ನಿಮಿತ್ತ. Show all posts

06 February 2010

ನಾಳೆ (ದಿ:೦೭/೦೨/2010) ಪೋಲಿಯೋ ಭಾನುವಾರ...



















ಪೋಲಿಯೋ ಗ್ಗೆ ಗೂಗಲ್ ನಲ್ಲಿ ಹುಡುಕುತ್ತಿದ್ದಾ ಸಿಕ್ಕ ಫೋಟೋಗಳಿವು.
ಫೋಲಿಯೋ
ಭೀಕರತೆಯನ್ನು ಪದಗಳಲ್ಲಿ ವಿವರಿಸುವುದಕ್ಕಿಂತಲೂ ಅರ್ಥಪೂರ್ಣವಾಗಿ ಪೋಟೋಗಳು ತಿಳಿಸಬಲ್ಲವು.



ಫೋಲಿಯೋ ಭಾನುವಾರ
ಪ್ರತಿ ವರ್ಷ ನಮ್ಮ ಸರ್ಕಾರ ಡಿಸೆಂಬರ್ ಮತ್ತು ಜನವರಿ ತಿಂಗಳ ಮೊದಲ ಭಾನುವಾರಗಳನ್ನು 'ಪೋಲಿಯೋ ಭಾನುವಾರ' ಎಂದು ಗುರುತಿಸಿ, ಪ್ರತಿ ಮಗುವಿಗೂ ಪೋಲಿಯೋ ಬರದಂತೆ ತಡೆಯುವ 'ಪೋಲಿಯೋ ಹನಿ' ಗಳನ್ನು ನೀಡುತ್ತಿದೆ. ನಮ್ಮ ಮುದ್ದಾದ ಮಕ್ಕಳು ಪೋಲಿಯೋ ಪೀಡಿತರಾಗಿ ವಿಕೃತರಾಗುವುದನ್ನು ತಪ್ಪಿಸಲು.
ಮರೆಯದೇ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಲು ಸಹಕರಿಸೋಣ.

ಪೋಲಿಯೋ ವಿರುದ್ಧದ ಈ ಪುಟ್ಟ ಹನಿ ಮುಂದಿನ ಪೀಳಿಗೆಯ ಬಾಳನ್ನು ಬೆಳಗಲಿ.....




ನಿಮ್ಮ
ಪರಶು..,
parashusagar@gmail.com

03 December 2009

ವಿಕಲತೆಯ ಕೂಪ: ಹಂದಿಗೋಡು ಕಾಯಿಲೆ

ಇಂದು ವಿಶ್ವ ಅಂಗವಿಕಲರ ದಿನಾಚರಣೆ.
ಅದ್ಯಾಕೋ ಒಂದು ವಿಧದ ಅಂಗವಿಕಲತೆಯೇ ಆಗಿರುವ ಹಂದಿಗೋಡು ಕಾಯಿಲೆ ಬಗ್ಗೆ ಹೇಳಬೇಕೆನಿಸುತ್ತಿದೆ.
ನಮ್ಮ ಶಿವಮೊಗ್ಗ ಜಿಲ್ಲೆ ಪ್ರಪಂಚದ ಇತಿಹಾಸಕ್ಕೆ ಏನೇನೇನೋ ಕೊಡುಗೆ ನೀಡಿದೆ. ಹಾಗೆಯೇ ಎರಡು ವಿಚಿತ್ರ ಖಾಯಿಲೆಗಳನ್ನೂ ಬಳುವಳಿಯಾಗಿ ನೀಡಿದೆ. ಅವುಗಳಲ್ಲಿ ಒಂದು ಕೆ.ಎಫ್.ಡಿ. ಎಂದು ಕರೆಯಲ್ಪಡುವ ಕ್ಯಾಸನೂರು ಕಾಡಿನ ಕಾಯಿಲೆ. ಇದನ್ನೇ ಮಂಗನ ಕಾಯಿಲೆ ಎಂತಲೂ ಕರೆಯುತ್ತಾರೆ. ನಮ್ಮ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರು ಎಂಬ ಹಳ್ಳಿ ಈ ಕಾಯಿಲೆಯ ತವರೂರು.
ಶಿವಮೊಗ್ಗ ಜಿಲ್ಲೆಯನ್ನೊಂದು ಕೊಡುಗೆ ಹಂದಿಗೋಡು ಕಾಯಿಲೆ. 'ಹಂದಿಗೋಡು ಸಿಂಡ್ರೋಮ್' ಎಂದು ವೈಧ್ಯಲೋಕದಲ್ಲಿ ಪರಿಚಿತವಿರುವ, ವ್ಯಕ್ತಿಯ ಅಂತ:ಸತ್ವವನ್ನೇ ಕುಗ್ಗಿಸಿ ಅಂಗವೈಕಲ್ಯಕ್ಕೆ ತಳ್ಳುವ ವಿಚಿತ್ರ ಕಾಯಿಲೆ. ಇದರ ತವರೂರು ನಮ್ಮ ಜಿಲ್ಲೆಯ ನಮ್ಮ ಸಾಗರ ತಾಲ್ಲೂಕಿನ ಹಂದಿಗೋಡು ಎಂಬ ಒಂದು ಪುಟ್ಟ ಹಳ್ಳಿ. ಈ ಹಳ್ಳಿಯೇ ಇಂದಿಗೂ ಇದರ ಪ್ರಮುಖ ಕಾರಸ್ಥಾನ ಕೂಡಾ ಆಗಿದೆ.
ಹಂದಿಗೋಡು ಸಾಗರ ಪಟ್ಟಣದಿಂದ ಕೇವಲ ಎಂಟು ಕಿ.ಮೀ. ದೂರದಲ್ಲಿರುವ ಒಂದು ಹಳ್ಳಿ. ಇಲ್ಲಿರುವ ಬಹುತೇಕ ಕುಟುಂಬಗಳು ದಲಿತ ವರ್ಗಕ್ಕೆ ಸೇರಿದವು. ಸಾಮಾನ್ಯವಾಗಿ ಇವರ ಕಸುಬು ಕೃಷಿ ಕೂಲಿ. ಇಂತಹ ದಲಿತ ಕುಟುಂಬಗಳನ್ನೇ ಈ ಕಾಯಿಲೆ ಕಳೆದ ಮೂರೂವರೆ ದಶಕಗಳಿಂದ ಕಾಡುತ್ತಿದೆ. ಅಲ್ಲಿನ ಒಂದು ವರ್ಗದ ಜನತೆಯ ಬದುಕನ್ನೇ ಮುರುಟಿ ಮುದ್ದೆ ಮಾಡಿ ಹಾಕಿದೆ. ಇಂತಹ ಒಂದು ಕಾಯಿಲೆಯನ್ನು ಗುರುತಿಸಿದವರು ಅಲ್ಲಿನ ಸಾಮಾಜಿಕ ಕಾರ್ಯಕರ್ತ ಹೆಚ್. ಎಂ. ಚಂದ್ರಶೇಖರ್. ಅಂದಿನಿಂದ ಇಂದಿನ ವರೆಗೆ ಪ್ರಪಂಚದಾಧ್ಯಂತ ಆನೇಕಾನೇಕ ಸಂಶೋಧನೆಗಳು ನಡೆದರೂ, ನಡೆಯುತ್ತಿದ್ದರೂ ಈ ಕಾಯಿಲೆಯ ಹುಟ್ಟಿಗೆ ಕಾರಣಗಳು ಸ್ಪಸ್ಟವಾಗಿ ತಿಳಿದಿಲ್ಲ. ಇಂದು ಈ ಕಾಯಿಲೆ ವಿಶ್ವದ ವೈಧ್ಯ ವಿಜ್ಞಾನಕ್ಕೇ ಸವಾಲಾಗಿ ಪರಿಣಮಿಸಿದೆ.
ಅಮಿತಾಬ್ ಬಚ್ಚನ್ ಮಗನಾಗಿ ಅಭಿಷೇಕ್ ಬಚ್ಚನ್ ಅಪ್ಪನಾಗಿ ನಟಿಸಿರುವ 'ಪಾ' ಚಿತ್ರದ ಬಗ್ಗೆ ಕೇಳಿರಬಹುದು. ಅಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ವಯೋ ವೃದ್ಧರಂತಹ ದೇಹ ಬೆಳವಣಿಗೆ ಹೊಂದಿದ 'ಪ್ರೊಜೇರಿಯಾ' ಎಂಬ ಕಾಯಿಲೆಯ ಕುರಿತು ಚಿತ್ರ ನಿರ್ಮಿಸಲಾಗಿದೆಯಂತೆ. ಪ್ರೋಜೇರಿಯಾಕ್ಕೆ ಸ್ವಲ್ಪ ವ್ಯತಿರಿಕ್ತವಾಗಿರುವಂತಹುದಿದು ಈ ಹಂದಿಗೋಡು ಕಾಯಿಲೆ. ಕಾಯಿಲೆ ಪೀಡಿತ ವ್ಯಕ್ತಿ ದಿನಗಳುರುಳಿದಂತೆ ಕುಬ್ಜನಾಗುತ್ತಾ ಹೋದಂತೆ ಕಾಣುತ್ತಾನೆ. ಕಾಲಿನ ಮಾಂಸಖಂಡಗಳು ಸಂಕುಚಿತಗೊಂಡು ಸಂಪೂರ್ಣ ದೇಹವೇ ಕುಗ್ಗಿ ನಡೆಯಲೂ ತುಂಬಾ ಕಷ್ಟಪಡುವಂತಾಗುತ್ತಾನೆ. ನಡೆಯಲೇ ಹೆಣಗಾಡುವಾಗ ಇನ್ನು ಕೆಲಸ ನಿರ್ವಹಿಸುವುದೆಂತು ಬಂತು..? ಹಾಗಾಗಿ ಆರ್ಥಿಕವಾಗಿಯೂ ವ್ಯಕ್ತಿ ಕುಬ್ಜನಾಗುತ್ತಾನೆ. ಇಂತಹ ದುಸ್ಥಿಯನ್ನು ನೀಡಿ 25-30 ರ ಯೌವ್ವನದಲ್ಲೇ ಸಾವಿನ ಮನೆಯೊಳಗೆ ಕರಕೊಂಡು ಬಿಡುತ್ತದೆ ಈ ಹಂದಿಗೋಡು ಕಾಯಿಲೆ.
ಈ ಧರೆಯ ಮೇಲಿರುವ ಚಿತ್ರ-ವಿಚಿತ್ರ ಕಾಯಿಲೆಗಳಿಗೆ ಲೆಕ್ಕವಿಲ್ಲ. ಹಾಗೆಯೇ ಮಲೆನಾಡು ಭಾಗದ ಒಂದೇ ಜಾತಿಯ ಜನರನ್ನೇ ಹೆಚ್ಚಾಗಿ ಕಾಡಿಸುತ್ತಿರುವ ಈ ಕಾಯಿಲೆ ಸಹ ತುಂಬಾ ವಿಚಿತ್ರವಾಗಿ ಕಾಣುತ್ತಿದೆ.