ವಕ್ರವೃಕ್ಷ

ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?

06 October 2009

ಸಚ್ಚಿ ಕವನ

ಹಾಯ್ ಪ್ರೆಂಡ್ಸ್....

ಕ್ಷಮಿಸಿ ಹೇಳಿದಂತೆ ನಡೆದುಕೊಳ್ಳಲಾಗುತ್ತಿಲ್ಲ.. ಬ್ಲಾಗ್ ಪ್ರಾರಂಭಿಸಿದ ತರುವಾಯ ಪ್ರತಿವಾರ ಬರೆಯುತ್ತೇನೆ ಎಂದು ಹೇಳಿದ್ದೆನಾದರೂ, ಮೂರನೇ ವಾರದಲ್ಲೇ ಕೊಟ್ಟ ಮಾತಿಗೂ ತಪ್ಪಿದ್ದೇನೆ., ಇದಕ್ಕೆ ವೆಬ್ ಸೆನ್ಸ್ ಕಾರಣ ಎಂದು ಕುಂಟು ನೆವ ಹೇಳಲು ಮನಸ್ಸಾಗುತ್ತಿಲ್ಲ. ಆದರೆ ಈ ಬ್ಲಾಗ್ ನ ಲೇ-ಔಟ್ ಅನ್ನು ಸ್ವಲ್ಪ ಬದಲಾಯಿಸಿ ಬರೆಯಲು ಕೂರೋಣ ಎಂಬ ಉದ್ದೇಶದಿಂದಷ್ಟೇ ತಪ್ಪಿಸಿಕೊಂಡಿದ್ದೇನೆ. ಹೊಸ ಟೆಂಪ್ಲೆಟ್ ಒಂದನ್ನು ಹುಡುಕಿ ಇಲ್ಲಿ ಅಳವಡಿಸಲು ಮಾತ್ರ ಈ ವೆಬ್ ಸೆನ್ಸ್ ಸ್ವಲ್ಪ ತೊಡಕಾಗಿದೆ ಅಷ್ಟೆ. ಹಾಗೇ ಈ ಬ್ಲಾಗ್ ನ ಉದ್ದೇಶಕ್ಕೆ ಅನುಗುಣವಾದ ಕೆಲವು ವೆಬ್ ಲಿಂಕ್ ಗಳ ತಡಕಾಟದಲ್ಲಿದ್ದೇನೆ.. ನಿಮಗಾವುದಾದರೂ ಉಪಯುಕ್ತ ತಾಣ ಸಿಕ್ಕರೆ ಖಂಡಿತ ಮರೆಯದೆ ತಿಳಿಸಿ. ಈ ನಡುವೆ ನಮ್ಮ ಸಚ್ಚಿ (ಸಚ್ಚಿದಾನಂದ) ರವರು ತುಂಬಾ ಆಸ್ಥೆಯಿಂದ ತಮ್ಮ ಒಂದು ಕವನವನ್ನು ಕಳಿಸಿದ್ದಾರೆ. ಅದನ್ನೂ ಇಲ್ಲಿ ಪ್ರಕಟಿಸುತ್ತಿದ್ದೇನೆ. ಓದಿ, ನಿಮಗನಿಸಿದ್ದನ್ನು ಅವರಿಗೆ ತಿಳಿಸಿ. ಮುಂದಿನ ಬರಹದಲ್ಲಿ ಮತ್ತೆ ಸಿಕ್ತೀನಿ...





ಸಚ್ಚಿದಾನಂದರವರ



ಬೀದಿ ಹೈಕಳು


ನೋಡಿದ್ದೀರ ಬೀದಿ ಹೈಕಳ
ಏನೂ ಅರಿಯದ ಮಕ್ಕಳ
ದೇಹ ಮೂಳೆ ಚಕ್ಕಳ
ಮಾತಾಡ್ತಾವೆ ಉರಿದಂತೆ ಅರಳ
ಕಣ್ಣಲಿ ಆಸೆ ಪಳಪಳ
ಕನಸುಗಳು ತುಂಬಿದ ಮನಸ್ಸಿನ ಅಂಗಳ
ನಡತೆ ತೀರ ಸರಳ
ಧೈರ್ಯ ತುಂಬಾ ವಿರಳ
ಇವರ ಸ್ಥಿತಿಗತಿ ಬಹಳ ಕರಾಳ
ಇವರ ಉತ್ಸಾಹ ಮಾಡುತ್ತದೆ ಮರುಳ
ಇವರಿಗೆ ಮಾಮೂಲು ಬೈಗುಳ
ಇವರ ದಿನಚರಿ ಪೂರ್ತಿ ಜಗಳ
ಇವರ ನೋವು ಹಿಚುಕುತ್ತದೆ ಕರುಳ
ಇವರ ಸಾವು ಬಿಗಿಯುತ್ತದೆ ಕೊರಳ
ಬಿಸಿಲಲಿ ಬೆಂದು ಬಯಸಿವೆ ನೆರಳ
ಆಗಲಿ ಇವರಿಗೆ ಮಂಗಳ.
--------ಸಕ್ಕತ್ ಸಚ್ಚಿ